ಜಿಲ್ಲಾಸುದ್ದಿ

ವಿವಿಧೆಡೆ ಜೂಜಾಟ: ಶಿಕ್ಷಕ, ನರ್ಸ್ ಸೇರಿ ಹಲವರ ಬಂಧನ

ಕಲಬುರ್ಗಿ, ಜು.೫- ನಗರದ ವಿವಿಧೆಡೆ ಜೂಜಾಟದ ಸ್ಥಳಗಳ ಮೇಲೆ ಪ್ರತ್ಯೇಕವಾಗಿ ಪೋಲಿಸರು ಕಾರ್ಯಾಚರಣೆ ಕೈಗೊಂಡು ಶಿಕ್ಷಕ ಹಾಗೂ ನರ್ಸ್ ಸೇರಿ ಹಲವರನ್ನು ಬಂಧಿಸಿದ್ದಾರೆ. ನಗರದ ಹೊರವಲಯದ ಭೂಪಾಲ್ ತೆಗನೂರು ಗ್ರಾಮದ ಸೂರತ್ ಹೊಟೇಲ್ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ ವ್ಯಕ್ತಿ ಲಾಭಕ್ಕೋಸ್ಕರ ಸಾರ್ವಜನಿಕರಿಂದ ಹಣ ಪಡೆದು ಒಂದು ರೂ.ಗೆ ೮೦ರೂ.ಗಳನ್ನು ಕೊಡುವುದಾಗಿ ಹೇಳಿ ಮಟಕಾ ಸಂಖ್ಯೆಗಳ ಚೀಟಿಗಳನ್ನು ಬರೆದುಕೊಳ್ಳುತ್ತಿರುವ ಖಚಿತ ಮಾಹಿತಿ ಪಡೆದ ವಿಶ್ವವಿದ್ಯಾಲಯ ಠಾಣೆಯ ಪಿಐ ಚಂದ್ರಶೇಖರ್ ತಿಗಡಿ, ಸಿಬ್ಬಂದಿಗಳಾದ ಈರಣ್ಣ, ಮಹೇಶ್ ಅವರು ಕಾರ್ಯಾಚರಣೆ ಕೈಗೊಂಡು ಬಂಧಿಸಿದರು.


ಬoಇತನಿಗೆ ಭೂಪಾಲ್ ತೆಗನೂರು ಗ್ರಾಮದ ನಿವಾಸಿ ಅಲೀಂಖಾನ್ ತಂದೆ ಅಲ್ಲಾವುದ್ದೀನ್ (೩೫) ಎಂದು ಗುರುತಿಸಲಾಗಿದೆ. ಬಂಧಿತನಿoದ ೨೦೧೦ರೂ.ಗಳು ಮತ್ತು ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.


ಮತ್ತೊoದು ಕಾರ್ಯಾಚರಣೆಯಲ್ಲಿ ಖಚಿತ ಭಾತ್ಮಿ ಮೇರೆಗೆ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಹತ್ತಿರ ಇರುವ ಮೆಡಿಪ್ಲಸ್ ಮೆಡಿಕಲ್ ಅಂಗಡಿ ಹತ್ತಿರ ಸಂದಿಯಲ್ಲಿ ಸಾರ್ವಜನಿಕ ರಸ್ತೆ ಮೇಲೆ ಒಬ್ಬ ವ್ಯಕ್ತಿ ಲಾಭಕ್ಕೋಸ್ಕರ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ, ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಕುರಿತು ಖಚಿತ ಭಾತ್ಮಿ ಮೇರೆಗೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಿಸ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಜಕುಮಾರ್, ಅರವಿಂದ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದರು.


ಬoಧಿತ ಆರೋಪಿಯನ್ನು ಫರತಾಬಾದ್‌ನ ಕಾರು ಚಾಲಕ ಬಸವರಾಜ್ ತಂದೆ ಅಂಬಣ್ಣ ಫರತಾಬಾದ್ ಎಂದು ಗುರುತಿಸಲಾಗಿದೆ. ಬಂಧಿತನಿoದ ೯೦೦೦ರೂ.ಗಳ ನಗದು, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ನು, ಒಂದು ನೀಲಿ ಬಣ್ಣದ ೨೦೦೦ರೂ.ಗಳ ಮೌಲ್ಯದ ಸ್ಯಾಮಸಂಗ್ ಮೊಬೈಲ್ ಜಪ್ತಿ ಮಾಡಿಕೊಂಡರು. ಈ ಕುರಿತು ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಚೌಕ್ ಠಾಣೆಯ ಎಎಸ್‌ಐ ತಾರಾಸಿಂಗ್ ಅವರ ನೇತೃತ್ವದಲ್ಲಿ ಹುಮ್ನಾಬಾದ್ ಬೇಸ್ ಹತ್ತಿರ ಅಯ್ಯರವಾಡಿಗೆ ಹೋಗುವ ರಸ್ತೆಯಲ್ಲಿರುವ ಅಪ್ಪಣ್ಣ ಹೇರ್ ಕಟಿಂಗ್ ಸಲೂನ್ ಅಂಗಡಿಯ ಎದುರು ಸಾರ್ವಜನಿಕ ರಸ್ತೆಯ ಮೇಲೆ ಬಾಂಬೆ ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದುಕೊಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದರು. ಬಂಧಿತ ವ್ಯಕ್ತಿಯನ್ನು ಅಯ್ಯರವಾಡಿಯ ಭವಾನಿ ಗುಡಿಯ ಹತ್ತಿರದ ನಿವಾಸಿ ಶಿವಾಜಿ ತಂದೆ ಚಂದ್ರಕಾoತ್ ಬರ್ವೆ ಎಂದು ಗುರುತಿಸಲಾಗಿದೆ. ಬಂಧಿತನಿoದ ೧೨೩೦ರೂ.ಗಳು, ಮಟಕಾ ಚೀಟಿ, ಬಾಲ್‌ಪೆನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡರು.


ಸ್ಟೇಷನ್ ಬಜಾರ್ ಠಾಣೆಯ ಎಎಸ್‌ಐ ಮಹಾಂತಪ್ಪ ಅವರು ಸಿಟಿ ಬಸ್ ನಿಲ್ದಾಣದ ಹತ್ತಿರ ಕಾರ್ಯಾಚರಣೆ ಕೈಗೊಂಡು ದೈವಲೀಲೆಯ ಮಟಕಾ ನಂಬರ್ ಬರೆದು ಚೀಟಿ ಕೊಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು. ಬಂಧಿತನಿಗೆ ಅಂಬಿಕಾ ನಗರದ ಪ್ಲಂಬರ್ ಕೆಲಸಗಾರ ಮಹೆಬೂಬ್ ತಂದೆ ಮಹ್ಮದ್ ಇಸ್ಮಾಯಿಲಸಾಬ್ (೪೧) ಎಂದು ಗುರುತಿಸಲಾಗಿದೆ. ಬಂಧಿತನಿoದ ೧೧೦೦ರೂ.ಗಳು, ಎರಡು ಮಟಕಾ ಚೀಟಿಗಳು, ಒಂದು ಬಾಲ್‌ಪೆನ್ನು ವಶಪಡಿಸಿಕೊಂಡರು.


ಚೌಕ್ ಠಾಣೆಯ ಎಎಸ್‌ಐ ತಾರಾಸಿಂಗ್ ಚವ್ಹಾಣ್ ಅವರು ಶಹಾಬಜಾರ್ ನಾಕಾ ಹತ್ತಿರ ಶಹಾಬಜಾರ್ ಸುವರ್ಣ ನಗರದ ಹನುಮಾನ್ ದೇವಸ್ಥಾನದ ಹಿಂದುಗಡೆ ಕೆಲವರು ದುಂಡಾಗಿ ಕುಳಿತು ಜೂಜಾಟವಾಡುತ್ತಿರುವ ಖಚಿತ ಭಾತ್ಮಿ ಮೇರೆಗೆ ಪಂಚರೊoದಿಗೆ ದಾಳಿ ಮಾಡಿ, ನಾಲ್ವರನ್ನು ಹಿಡಿದು ವಿಚಾರಿಸಿದರು.


ಬಂಧಿತರಾದ ಸುವರ್ಣ ನಗರದ ಕಿರಾಣಿ ಅಂಗಡಿ ವ್ಯಾಪಾರಿ ಪ್ರಭುಲಿಂಗ ರಾಚಯ್ಯ ಹಿರೇಮಠ್‌ನಿಂದ ೨,೨೭೦ರೂ.ಗಳನ್ನು, ಖಾಸಗಿ ಶಾಲಾ ಶಿಕ್ಷಕ ರಾಹುಲ್ ತಂದೆ ರಾಜಶೇಖರ್ ಸುತಾರನಿಂದ ೧,೮೦೦ರೂ.ಗಳು, ನರ್ಸ್ ನಾಗೇಶ್ ತಂದೆ ಅಂಬಾದಾಸ್ ಖಾನಪೂರ್‌ನಿಂದ ೨,೨೫೦ರೂ.ಗಳು, ಕಿರಾಣಿ ಅಂಗಡಿ ವ್ಯಾಪಾರಿ ಪ್ರಸಾದ್ ತಂದೆ ದಯಾನಂದ್ ತಡಕಲ್‌ನಿಂದ ೨,೩೫೦ರೂ.ಗಳು ಸೇರಿ ನಾಲ್ವರಿಂದ ಒಟ್ಟು, ೮೬೭೦ರೂ.ಗಳು, ಜೂಜಾಟದ ಸ್ಥಳದಲ್ಲಿದ್ದ ೭,೬೦೦ರೂ.ಗಳು ಹಾಗೂ ೫೨ ಇಸ್ಪೇಟ್ ಎಲೆಗಳೊಂದಿಗೆ ಒಟ್ಟು ನಗದು ೧೬,೨೭೦ರೂ.ಗಳನ್ನು ಪೋಲಿಸರು ವಶಪಡಿಸಿಕೊಂಡರು. ಈ ಕುರಿತು ಪ್ರಕರಣ ದಾಖಲಾಗಿದೆ.


ಎಂ.ಬಿ. ನಗರ ಠಾಣೆಯ ಪೋಲಿಸರು ಸಿಸಿಬಿ ಘಟಕದ ಪಿಎಸ್‌ಐ ಅರುಣಕುಮಾರ್ ಅವರ ನೇತೃತ್ವದಲ್ಲಿ ಬಸವೇಶ್ವರ ಆಸ್ಪತ್ರೆ ಎದುರು ಇರುವ ಪಾರ್ವತಿ ಮೆಡಿಕಲ್ ಅಂಗಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಂದು ರೂಗೆ ೮೦ರೂ.ಗಳನ್ನು ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ, ಸಂಖ್ಯೆ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಬಂಧಿಸಿದರು. ಬಂಧಿತ ವ್ಯಕ್ತಿಯನ್ನು ಪ್ರಶಾಂತ ನಗರ (ಎ)ದ ನಿವಾಸಿ ಚೆನ್ನಪ್ಪ ತಂದೆ ನಂದಪ್ಪ ದಾಮಾ ಎಂದು ಗುರುತಿಸಲಾಗಿದೆ. ಬಂಧಿತನಿoದ ೨,೫೦೦ರೂ.ಗಳು, ೨೦೦೦ರೂ.ಗಳ ಮೌಲ್ಯದ ಒಂದು ಸ್ಯಾಮಸಂಗ್ ಮೊಬೈಲ್ ಫೋನ್ ಪತ್ತೆಯಾಗಿದ್ದು, ಫೋನ್ ಪೇ ಹಾಕಿಸಿಕೊಂಡಿದ್ದದು ಸಹ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button