ಸಾಂಸ್ಕೃತಿಕ

ಸಂಗೀತ ಎಲ್ಲರ ಮನಸ್ಸನ್ನು ಒಂದುಗೂಡಿಸುವ ಶಕ್ತಿ: ಸಿದ್ರಾಮಪ್ಪ ಆಲಗೂಡಕರ

ವಚನ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭಿಮತ • ಸಂಗೀತವು ಭಾಷೆ, ಜಾತಿ, ಧರ್ಮದ ಗಡಿಗಳನ್ನು ಮೀರಿ ಹೃದಯಗಳನ್ನು ಬೆಸೆಯುತ್ತದೆ

ಸಂಗೀತವು ಮನುಷ್ಯನ ಮನಸ್ಸಿಗೆ ಸಂತೋಷ, ನೆಮ್ಮದಿ ಮತ್ತು ಉತ್ಸಾಹವನ್ನು ನೀಡುವ ಅದ್ಭುತ ಶಕ್ತಿಯಾಗಿದ್ದು, ಭಾಷೆ, ಜಾತಿ ಹಾಗೂ ಧರ್ಮದ ಎಲ್ಲ ಗಡಿಗಳನ್ನು ಮೀರಿ ಜನರನ್ನು ಒಂದಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಸಮಾಜಸೇವಕ ಹಾಗೂ ಪಂಚಪೀಠಗಳ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ಹೇಳಿದರು.

ನಗರದ ದೇವಿನಗರದಲ್ಲಿರುವ ಅಕ್ಕಮಹಾದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿ ಸರಸ್ವತಿ ಕಲಾ ಬಳಗ ಆಯೋಜಿಸಿದ್ದ ‘ವಚನ ವೈಭವ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಗೀತವು ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುವುದರ ಜೊತೆಗೆ, ಕಲೆ ಮೇಲಿನ ಅಭಿರುಚಿಯನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಮಹಿಳಾ ಮುಖಂಡೆ ಅಂಬಿಕಾ ಗುಬ್ಬೇವಾಡ ಉದ್ಘಾಟಿಸಿದರು. ವಿಜಯಲಕ್ಷ್ಮೀ ಗುಂಡಗುರ್ತಿ, ಉಮಾದೇವಿ ಪಟ್ಟಣ, ಅಂಬಾಜಿ ಕಾಳಗಿ, ನಾಗರಾಜ್ ಗೋವಿ, ರಾಜು ಸರಡಗಿ, ದತ್ತಯ್ಯ ಗುತ್ತೇದಾರ ಹಾಗೂ ಸಂಘದ ಅಧ್ಯಕ್ಷ ಶರಣು ಕಟ್ಟಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗೀತ ಕಲಾವಿದರಾದ ಸೂರ್ಯಕಾಂತ ಶಾಸ್ತ್ರಿ, ಗುರುಲಿಂಗಯ್ಯ ಶಾಸ್ತ್ರಿ, ಸೋಮಯ್ಯ ಹಿರೇಮಠ, ಗುರುಲಿಂಗಯ್ಯ ಸ್ಥಾವರಮಠ, ರವಿಸ್ವಾಮಿ ಗೋಟೂರು, ಶಿವಾನಂದ ಅಳ್ಳಗಿ, ಬಸಯ್ಯ ಗುತ್ತೇದಾರ, ವೀರಯ್ಯ ಸ್ವಾಮಿ ಮಾಡ್ಯಾಳ, ಶಿವಕುಮಾರ್ ಬೇಡಜೂರಿ ಹಾಗೂ ರಾಮಲಿಂಗ ಅಟ್ಟೂರು ಸಂಗೀತ ಸೇವೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಆನಂದ ಪೂಜಾರಿ, ಪ್ರವಚನಕಾರ ಸಿದ್ದಯ್ಯ ಶಾಸ್ತ್ರಿ ನರೋಣ ಹಾಗೂ ಕಲಾವಿದರಾದ ಸೈದಪ್ಪ ಚವಡಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button